Saturday, March 19, 2011

ಗುಡ್ ನೈಟ್ ಕವನ ೪ ....

ಬರೆದ ಓಲೆಗಳಲಿ
ದುಃಖ ದುಮ್ಮಾನ ನೋವಿನ ಪದಗಳಿತ್ತು.
ಬರೆವ ಘಳಿಗೆಯಲಿ ಕಣ್ಣಂಚಲಿ ಕುಳಿತಿದ್ದ
ಮಂಜು ಮಂಜು ಹನಿಸಾಲು ನಿನಗೆಲ್ಲಿ ಕಂಡಿತ್ತು ?

ಓಲೆ ಸಿಗುವಾಗಲೆಲ್ಲ ಎಲ್ಲೆ ಮೀರಿದ
ದೈವೀಕ ಸಂತಸ ನಿನ್ನದಾಗುತ್ತಿತ್ತು
ಆದರೆ
ಕೊನೆಯ ಸಾಲು ಬರೆವ ಮುನ್ನವೇ
ಎಲ್ಲಿ ಭಾವ ಭಾರಕೆ ಕುಸಿದು ಮಲಗುವೆನೋ
ಎನುವ ಎನ್ನ ಅಸಹಾಯಕತೆ ನಿನಗೆಲ್ಲಿ ತಿಳಿದಿತ್ತು ?


ಕೆಲವಷ್ಟು ಹಾಗೆಯೇ
ಪದ ಮೀರಿದ್ದು
ಕಲ್ಪನೆಗೆ ತಾಕದ್ದು
ನಿನ್ನುಸಿರು ತಾಕುವ ಸನಿಹವೇ ಬೇಕು
ಮೆಲ್ಲಗೆ ನಿನ್ನ ಕಿವಿಯ ಬಳಿ ತುಟಿಯಿಟ್ಟು
ಎಲ್ಲ ಹೇಳಬೇಕು
ಮತ್ತೆ ನೀನು ಎನ್ನೆದೆಗೆ ತಲೆಯಿಟ್ಟು
ಎದೆಯ ಗೂಡಿನ ದನಿಗೆ ಕಿವಿಯಾಗಬೇಕು
ನೀನೇ ನಾನಾಗಬೇಕು
ನಾನು ನೀನಾಗಿ.....

4 comments:

Dr.D.T.Krishna Murthy. said...

ಚೆಂದದ ಕವಿತೆ .ಇಷ್ಟವಾಯಿತು.

ಸುಧೇಶ್ ಶೆಟ್ಟಿ said...

ಚ೦ದ ಇದೆ ಕವನ :)

RAGHAVENDRA R said...

Super... tumba chennagide..

Bhavukateya. .hadiyalli.. kavite horatu banda hagide..

ಗೌತಮ್ ಹೆಗಡೆ said...

ಪ್ರತಿಕ್ರಿಯೆ ನೀಡಿ ಬೆಂಬಲಿಸಿದ ಕೃಷ್ಣ ಮೂರ್ತಿಯವರಿಗೆ . ಸುಧೇಶ್ ಅವರಿಗೆ , ರಾಘವೇಂದ್ರರರಿಗೆ ತುಂಬಾ ಧನ್ಯವಾದ :)