Wednesday, July 4, 2012

ರವಿಯಿರದ ಸಂಧಿಯಲಿ ಚಂದ್ರ ಅವಕಾಶವಾದಿ


ರವಿಯಿರದ ಸಂಧಿಯಲಿ ಚಂದ್ರ ಅವಕಾಶವಾದಿ ..

ಇಂದಿನ ರವಿ ಎಂದಿನಂತಿಲ್ಲ
ಉಡುಗುತಿದೆ ಬೆಳಗುವ ತ್ರಾಣ
ಅಳಿಯುತಿದೆ ಬೆಳಕಿನ ಬಣ್ಣ
ಅಪರಾಹ್ನ ಅಡಿಯಿಡುವ ಹೊತ್ತಿಗೆ ಅಕಾಲ ಸಂಜೆ
ರಾತ್ರಿ ದೂರಿಲ್ಲ
ಹಗಲಿಲ್ಲದ ಮೇಲೆ ರವಿಯೂ ಇಲ್ಲ

ರವಿ ಅರಳಿಸಿದ ಆ ಹೂವು
ರವಿ ಕಾಣಿಸಿದ ಹೂವ ಬಣ್ಣದ ಬೆರಗು
ಅರಳಿದ್ದು ಮುದುಡಿಹೋಯಿತು
ಕಂಡಿದ್ದು ಎಲ್ಲಿ ಕಾಣೆಯಾಯಿತೋ?
ಕತ್ತಲಲ್ಲಿ ಕಣ್ಣಿದ್ದೂ ಕುರುಡು
ಅಗೋ ಅಲ್ಲಿ
ರವಿಯಿರದ ಸಂಧಿಯಲಿ ಹಾಳು ಅವಕಾಶವಾದಿ ಚಂದ್ರ
ಹೊಳಪಾಗಿ ಕಂಡರೂ ದಾರಿ ತೋರಲಾರ
ಕೆರಳಿಸುವ ಕಲೆ ಗೊತ್ತು.ಅರಳಿಸುವ ಸಿದ್ಧಿ ಒಲಿದಿಲ್ಲ.
ಹಚ್ಚಬೇಕಿದೆ ದೀಪ ಕನಸ ಕಡ್ಡಿಯ ಗೀರಿ
ನಾಳೆಯ ಹಗಲು ಈಗಲೇ ಬೆಳಕಾಗಲಿ
ಎಂದಿನಂತಿಲ್ಲದ ರವಿ ನಾಳೆ ಏನಾಗುವನೋ
ರವಿ ಬಂದರೂ ಬರಬಹುದು ನಾಳೆ
ಖಾತ್ರಿಯಿಲ್ಲ 

5 comments:

sunaath said...

Excellent poem.

shridhar said...

ದೋಸ್ತಾ ಸೂಪರ್ ಕವನ

Ashok.V.Shetty, Kodlady said...

Chennagide Goutam...

SANTA said...

kavan vaachaaliyaayiteno? neevu gadya bredare chennaada abhivyakti endenisutftde.

SANTA said...

hey I am back!