Sunday, September 23, 2012

ಫೇಸ್ ಬುಕ್ ಸ್ಟೇಟಸ್ ಬಾರಿನಿಂದ ಒಂದಿಷ್ಟು :)

ಈ ನೀತಿ ಕಥೆಗಳು,ಬೋಧನೆಗಳು,ತತ್ವಗಳು,ಉಪದೇಶಗಳು , ಧರ್ಮ -ಅಧರ್ಮ ,ಪಾಪ ಪುಣ್ಯಗಳ ಬಗೆಗಿನ ಜಿಜ್ಞಾಸೆಗಳು..ಇವೆಲ್ಲ ನಿಜಕ್ಕೂ ತುಂಬಾ ಉಪಯುಕ್ತವಾದ ಸಂಗತಿಗಳು. ಎಲ್ಲರನ್ನೂ ಇವುಗಳು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ ,ಕಡೇಪಕ್ಷ ಕೆಲವರಾದರೂ ಇವುಗಳ ಪ್ರಯೋಜನ ಪಡೆದು ಬದಲಾಗುತ್ತಾರೆ.ತುಂಬ ಒಳ್ಳೆಯವರಾಗುತ್ತಾರೆ. ಆದರೆ ನಮ್ಮ ಅದೃಷ್ಟಕ್ಕೋ ,ದುರಾದೃಷ್ಟಕ್ಕೋ ,ಪುಣ್ಯಕ್ಕೋ ಅಥವಾ ಇನ್ಯಾವುದಕ್ಕೋ ಗೊತ್ತಿಲ್ಲ.ನಾವು ಮಾತ್ರ ಒಳ್ಳೆಯವರಾಗಿ ಬದಲಾಗುವ ಆ 'ಕೆಲವರ 'ಲಿಸ್ಟಿನಲ್ಲಿ ಇರುವುದಿಲ್ಲ ;) :) ;) ಇದು ಇಷ್ಟೇಯಾ..ಎಷ್ಟಂದ್ರೂ ಅಷ್ಟೆಯಾ ;) ನಮ್ಮ ಹಣೆಬರಹಕ್ಕೆ ನಾವೇ ಹೊಣೆ :)

...........................................

ಆ ಧರ್ಮದ ಪ್ರಕಾರ ಸಂಗೀತವೆಂದರೆ ನಿಷಿದ್ಧ ..ಅದು ಅವರ ಮಾತಿನಲ್ಲಿ ಹೇಳುವುದಾದರೆ 'ಹರಾಮ್ '..ಆದರೆ ಸಂಗೀತದಲ್ಲಿ ಆ ಧರ್ಮಕ್ಕೆ ಸೇರಿದವರನ್ನ ಮೀರಿಸಲು ಸಾಧ್ಯವೇ ಇಲ್ಲ ..ಜಗತ್ತಿನ ಅತಿ ಶ್ರೇಷ್ಠ ಎನ್ನಬಹುದಾದ ಸ್ವರಗಳು ಆ ಧರ್ಮದವರ ಹೆಸರಿನಲ್ಲಿಯೇ ಇದೆ. ಸಂಗೀತದ ಮಾಹಾಮಹಿಮರಲ್ಲಿ ಬಹುತೇಕರು ಅವರೇ .ಕಲೆಗಿರುವ ಶಕ್ತಿಯೇ ಆ ತೆರನಾದದ್ದು ..ಅದು ಎಲ್ಲ ಎಲ್ಲೆಗಳನ್ನೂ ,ಎಲ್ಲ ಕಟ್ಟು ಪಾಡುಗಳನ್ನೂ ಮೀರಿ ನಮ್ಮನ್ನು ಆವರಿಸಿ ಬಿಡುತ್ತೆ .ನಮ್ಮನ್ನು ಕೇವಲ ಮನುಷ್ಯರನ್ನಾಗಿಯಷ್ಟೇ ಉಳಿಸುತ್ತೆ .:) :)

.............................................

Please dont tell me that you are good..I hate that title ..it is very difficult to mentain that .we have to do lot of circus to retain that title.The terms like good, perfect literally does not exist in reality.I want to be myself . :) my goal is not to be good, but to overcome my badness as much as possible. I cannot say it as completely ..if i say that then i will be god :) :)I am human and like to be human only :) ;)

...............................................ನುಸ್ರತ್ ಫತೆಹ್ ಅಲಿ ಖಾನ್ ಅವರ ಒಂದು ಜನಪ್ರಿಯ ಕೃತಿ ಇಲ್ಲಿದೆ ನೋಡಿ ;)

Sunday, September 2, 2012

ಗುಡ್ ನೈಟ್ ಕವನಗಳು......

ನೂರು ಭಾವ ನೂರು ನೋವು
ಹಳೆಯ ನೆನಪುಗಳು ಅಲೆ ಅಲೆಯಾಗಿ
ಮನದ ತೀರಕೆ ಬಡಿದು ಮರಳುವಾಗ
ಅಲೆ ಬಂದು ಹೋದ ಘಳಿಗೆಯಲಿ
ಉಳಿಯುವುದು ಕಣ್ಣಂಚಲಿ ಹನಿಸಾಲು
ಮತ್ತೆ ಎನ್ನ ಸಂತೈಸಲೆಂದೇ ಹುಟ್ಟಿದ ನೀನು
ನೀನು ಮಾತ್ರ ಪುಟ್ಟಿ ನೀನು ಮಾತ್ರವೇ ..

............................................................

ಈ ರಾತ್ರಿಯ ದಿವ್ಯ  ನೆಮ್ಮದಿಯೆ
ಇರದ ಅಮ್ಮನ ಮಮತೆ ಮಡಿಲಾಗಲಿ
ಮೆಲು ಗಾಳಿಯ ಬೀಸು ಅವಳ ಜೋಗುಳವಾಗಲಿ
ಆ ಬಾಗು ಚಂದಮನೆ ತೂಗೋ ತೊಟ್ಟಿಲಾಗಲಿ
ನಾನಲ್ಲಿ ಬೆಳದಿಂಗಳ ಮುದ್ದೆಯಂಥ
ಮುದ್ದು ಮಗುವಾಗಲಿ
ನಾನೆಂದೂ ಹಾಗೇ ಇರಲಿ
ಮತ್ತೆ ಹಗಲಾಗದಿರಲಿ

.............................................................

ಒಮ್ಮೆಯೂ ಎನ್ನ ಒಲವಲ್ಲದೆ
ಇನ್ನೇನೂ ಕೇಳಲಿಲ್ಲ
ಒಮ್ಮೆಯೂ ಎನ್ನ ದೂರಲಿಲ್ಲ
ದೂರಿಟ್ಟು ಸತಾಯಿಸಲಿಲ್ಲ
ಸಿಡುಕಲಿಲ್ಲ ಮುನಿಯಲಿಲ್ಲ
ಇನ್ನಾರಿಗೋ ಹೋಲಿಸಿ ತೂಗಲಿಲ್ಲ
ಅಪರಂಜಿಯಂಥ ಪ್ರೀತಿ ನಿನದು
ನಿನ್ನ ಪಡೆದ ಭಾಗ್ಯ ಎನದು
ಖುಷಿಯ ಕಣ್ಣೀರಲ್ಲದೆ ಏನೂ ಇಲ್ಲ.
ನಿನ್ನೊಲವಿಗೆ ಪ್ರತಿಯಾಗಿ ಋಣಿಯಾಗಿ
ಈ ಅಲೆಮಾರಿ ಭಿಕಾರಿಯಲ್ಲಿ
ಏನೂ ಇಲ್ಲ.